ಉತ್ತರ ಹೇಳಜ್ಜಾ


‘ಸತ್ಯದ ಯಜ್ಞಕುಂಡದಲ್ಲಿ ನಾವು
ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ
ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ
ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ?


ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ
ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ
ಜನರ ಮೊಮ್ಮಕ್ಕಳೆಲ್ಲ ಈಗ
ವಿದೇಶಿ ಸಾಮಾನುಗಳ ಟಚ್ ಅಪ್
ಎಲ್ಲದಕ್ಕೂ ಬೇಕು ಅನ್ನುತ್ತಾರಲ್ಲ! ಏನ ಹೇಳ್ತಿಯಜ್ಜಾ?


ಮೊನ್ನೆ ಮೊನ್ನೆ ಅಜ್ಜಿ ಕಸ್ತೂರಬಾ ಬಂದು
ಸ್ವಾತಂತ್ರ ಚಳುವಳಿಯೊಳಗ
ನೀ ಬಹಳ ತ್ರಾಸ ಕೊಟ್ಟಿದ್ದಿ ಅಂತಾ
ಲಿಸ್ಟ್ ಕೊಟ್ಟು
‘ಈಗಿನ ನೀವುಗಳೆಲ್ಲಾ ಹೇಗಿದ್ದೀರಿ ನೋಡು’
ಅಂತ ಹೇಳಿ
ಮುದುಕ ಬಂದರೆ ತರಾಟೆ ತಗೋ ಅಂದಳಲ್ಲಾ ಹೌದೇನೋ ಯಜ್ಜಾ?


ಅಪ್ಪ, ಸ್ವತಂತ್ರ ದೇಶದ ಬಗೆಗೆ
ಹೆಮ್ಮೆ ಪಡುತ್ತ ನಿನ್ನ ಸ್ಮರಣೆ
ನಿನ್ನ ವಾಣಿಗಳನ್ನುಚ್ಚರಿಸುತ
ಫೋಟೋಗೆ ನಮಸ್ಕರಿಸುತ್ತಿದ್ದರೆ
ಮಕ್ಕಳು, ಮಮ್ಮಿ ಡ್ಯಾಡಿ
ಅನ್ನುತ್ತ ರಾಕ್ & ರೋಲ್ ಕೇಳುತ್ತ
ಮೈಕಲ್ ಜಾಕ್ಸನ್ ಫೋಟೋಗೆ
ಮುದ್ದಿಸುವದು ನೋಡಿ
ನಾನು ಇವೆರಡರ ಮಧ್ಯ
ಗೊದಮೊಟ್ಟೆಯಾಗುತ್ತಿದ್ದೇನಲ್ಲ; ಯಜ್ಜಾ-


ನಿನ್ನ ಜೊತೆ ಖಾದಿ ಉಟ್ಟು
ಜೇಲಿಗೆ ಹೋಗಿ ಬಂದವರು
ಈಗ ವಿದೇಶಿ ಸ್ಕಾರ್ಪ್
ಸ್ವೆಟ್ಟರ್ ಹಾಕಿಕೊಂಡು
ಸೋಫಾ ಮೇಲಿ ಕಾಲೇರಿಸಿ ಕುಳಿತು
ಗುಂಡು ಹಾಕಿ, ಕ್ಯಾಬರೆ ನೋಡುತ್ತ
ರಾಜಕಾರಣ ಮಾಡುತ್ತಿದ್ದಾರಲ್ಲ! ಥೂ ಯಜ್ಜಾ-


ನೀನು ಅಂದು ಒದ್ದೋಡಿಸಿದ
ಬ್ರಟೀಷರಷ್ಟೇ ಅಲ್ಲ
ಜಗತ್ತಿನ ಜನ ಜಾಗತೀಕರಣದ
ನೆಪದಲ್ಲಿ ಮತ್ತೆ ಬರುತ್ತಿದ್ದಾರೆ
ಒಂದೆಡೆ ಕೂಗಾಟ ಹೋರಾಟ
ಮತ್ತೊಂದೆಡೆ ರ್‍ಎಡ್ ಕಾರ್ಪೆಟ್ ಸ್ವಾಗತ
ದುಃಖಸುತ್ತಿದೀಯಾ! ಯಜ್ಜಾ


ಇಂದಿನ ಏಕೆ ೪೭ ಗನ್
ಮುಂದೆ ಅಂದು
ನೀ ಹೇಳುತ್ತಿದ್ದ ಕೊಡುತ್ತಿದ್ದ ಎಲ್ಲರನ್ನೂ
ಗೆಲ್ಲಬಲ್ಲ ಆಯುಧ ‘ಪ್ರೀತಿ’ ಎನ್ನುತ್ತಿದ್ದ
ತುಂಬು ಹೃದಯದ ನಿನ್ನ ಮಾತು
ಮತ್ತೆಂದಾದರೂ ಕೇಳಿಸಿಕೊಂಡಿವೆಯೇ? ಯಜ್ಜಾ


೫೦ನೆಯ ಸ್ವತಂತ್ರ ವರ್ಷದ
ದೇಶ ನೆನೆಸಿಕೊಂಡು
ಇಲ್ಲೊಬ್ಬ ಅಜ್ಜ ನಿನ್ನ ಹೆಸರು
ಕೂಗಿ, ಕೂಗಿ, ಬೆಚ್ಚಗಿರಲಿಕ್ಕೆ ಹೇಳಿ
ನಿನ್ನ ಫೋಟೋಗೆ ತನ್ನ ಹಳೆಯ ಕೋಟು ಹಾಕಿ
ಕಣ್ಣೀರು ಸುರಿಸುತ್ತ ನಿನ್ನೆಯೇ
ಸತ್ತು ಹೋದನಲ್ಲ!
ಇದೇನು ಯಜ್ಜಾ ಇದರರ್ಥ!!


ಕಣ್ಣು ಕಿವಿ, ಬಾಯಿ ಮುಚ್ಚಿದ
ಮಂಗಗಳನ್ನು ನೀನು ಹೀಗೇ ಇರಗೊಟ್ಟರೆ
ನಾ ಕೇಳಿದ ಪ್ರಶ್ನೆಗೆ
ಒಂದೊಂದೇ ಮಂಗನ್ನ ಸರಿಸುತ್ತ
ನೀ ತಪ್ಪಿಸಿಕೊಂಡಿದ್ದಾದರೆ
ನಾನು, ನೀನು ಬೇತಾಳ ವಿಕ್ರಮಾದಿತ್ಯರಾಗಿ
ಸುಡುಗಾಡಾದಾಗ ಅಡ್ಡಾಡಬೇಕಾದೀತು
ನಾ ಕಾಯೋದಿಲ್ಲ ಯಜ್ಜಾ ಇನ್ನ
“ಬೇಗ ಉತ್ತರ ಹೇಳು”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೆಂಟಯ್ಯನ ಅಂಗಿ
Next post ಏನಿಲ್ಲ?

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys